All profits go to girls in Kannada Medium Schools

ನಿರ್ವಾಣ

ನಿರ್ವಾಣ

 A  busy executive and a part time author  who is abroad on business runs into an old-time acquaintance. They decide to kill time with a few rounds of drinks. While the acquaintance begins narrating the story of his professional and family life. The writer, on the other hand carefully evaluating what to reply. Will their conversations, help them trust each other?    Achyuth Kumar has lent voice to the story written by  Vivek Shanbhag that explores the  monotonous nature of the modern life .  The music is composed by Bindu Malini

49.00

What’s in this Kannada Audiobook?

Buy Kelikatheya Kannada Audio Book.
Support a girl child studying in Kannada Medium School

The Kannada Audio book is produced to support the education of girls studying in Kannada Medium schools. Actors and Authors have not charged money for this project

Description

Vivek-Shanbhag-edited

ಲೇಖಕರು: ವಿವೇಕ ಶಾನಭಾಗ

ವಿವೇಕ ಶಾನಭಾಗ, ಜನಿಸಿದ್ದು ೧೯೬೨ರಲ್ಲಿ ಶಿರಸಿಯಲ್ಲಿ. ಇಂಜಿನೀಯರಿಂಗ್ ವಿದ್ಯಾಭ್ಯಾಸ. ಕನ್ನಡದ ಮುಖ್ಯ ಕತೆಗಾರರಲ್ಲಿ ಒಬ್ಬರಾದ ಇವರು ಒಟ್ಟು ೧೦ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮೊದಲ ಸಂಕಲನ "ಅಂಕುರ" (೧೯೮೫), ಲಂಗರು (೧೯೯೨), ಹುಲಿ ಸವಾರಿ (೧೯೯೫), ಮತ್ತೊಬ್ಬನ ಸಂಸಾರ (೨೦೦೫) ರಲ್ಲಿ ಪ್ರಕಟವಾದ ಕಥಾಸಂಕಲನಗಳು. "ಘಾಚರ್ ಘೋಚರ್" ಕಿರುಕಾದಂಬರಿ ೨೦೧೩ ರಲ್ಲಿ ಪ್ರಕಟವಾಯಿತು ಮತ್ತು ಇಂಗ್ಲಿಶ್ ಭಾಷೆಗೂ ತರ್ಜುಮೆಗೊಂಡು ಪ್ರಸಿದ್ಧವಾಯಿತು. ಇವರ ಕಾದಂಬರಿಗಳು: ಇನ್ನೂ ಒಂದು (೨೦೦೧), ಒಂದು ಬದಿ ಕಡಲು (೨೦೦೭) ಮತ್ತು ಊರು ಭಂಗ (೨೦೧೫). ಎರಡು ನಾಟಕಗಳನ್ನೂ ಇವರು ಪ್ರಕಟಿಸಿದ್ದಾರೆ. ಅವುಗಳು: "ಸಕ್ಕರೆ ಗೊಂಬೆ" (೧೯೯೯) ಮತ್ತು "ಬಹುಮುಖಿ" (೨೦೦೭). "ದೇಶಕಾಲ" ಎಂಬ ಕನ್ನಡದ ಸಾಹಿತ್ಯಿಕ ತ್ರೈಮಾಸಿಕದ ಸಮ್ಪಾದಕರಾಗಿ, ಅದನ್ನು ೫ ವರ್ಷಗಳ ಕಾಲ ನಡೆಸಿದ್ದರು.

Achyuth-Kumar

ಓದಿದವರು: ಅಚ್ಯುತ್ ಕುಮಾರ್

ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿರುವ ಅಚ್ಯುತ್ ಕುಮಾರ್ ಆರಂಭದಲ್ಲಿ ಶಿವಮೊಗ್ಗದ ನೀನಾಸಂ ರಂಗ ಕಲಾವಿದನಾಗಿದ್ದರು. ಗಿರೀಶ್ ಕಾಸರವಳ್ಳಿ 2000 ದಲ್ಲಿ ಗೃಹಭಂಗ ಎಂಬ ತಮ್ಮ ಕಿರುತೆರೆಯ ಧಾರಾವಾಹಿಯ ಒಂದು ಪ್ರಧಾನವಾದ ಪಾತ್ರಕ್ಕಾಗಿ ಇವರನ್ನು ಆಯ್ಕೆ ಮಾಡಿಕೊಂಡಾಗ ಒಬ್ಬ ನಟನಾಗಿ ಗುರುತಿಸಲ್ಪಟ್ಟರು. ಮುಂದೆ ಅಚ್ಯುತ್ ಕುಮಾರ್ ಒಬ್ಬ ಅವಲಂಬಿಸಬಹುದಾದ ನಟನಾಗಿ ಬೆಳೆದು ಹಲವಾರು ಪ್ರಶಸ್ತಿಗಳನ್ನು ಗಳಿಸಿದರು. ಮೂರು ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದಾರೆ ಹಾಗೂ ಶ್ರೇಷ್ಠ ಪೋಷಕ ನಟ, ಶ್ರೇಷ್ಠ ನಟ ಎರಡೂ ವಿಭಾಗಗಳಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಇದುವರೆಗೂ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಚ್ಯುತ್ ಕುಮಾರ್ ನಮಗಾಗಿ ನಿರ್ವಾಣ ಕತೆಯನ್ನು ಓದಿದ್ದಾರೆ.

bindu-malini

ಹಿನ್ನೆಲೆ ಸಂಗೀತ: ಬಿಂದು ಮಾಲಿನಿ

ಬಿಂದು ಮಾಲಿನಿ ಭಾರತೀಯ ಚಲನಚಿತ್ರ ರಂಗದಲ್ಲಿ, ಅದರಲ್ಲೂ ಪ್ರಮುಖವಾಗಿ ತಮಿಳು ಸಿನೆಮಾಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಿಂದು ನಾತಿಚರಾಮಿ, ಅರುವಿ ಮುಂತಾದ ಜನಪ್ರಿಯ ಸಿನೆಮಾಗಳಲ್ಲಿ ಕೆಲಸ ಮಾಡಿದ್ದಾರೆ. 2018 ರಲ್ಲಿ ತೆರೆಕಂಡ ನಾತಿಚರಾಮಿ ಇವರ ಸಂಗೀತ ನಿರ್ದೇಶನವಿರುವ ಇತ್ತೀಚಿನ ಸಿನೆಮಾ. ನಿರ್ವಾಣ ಎನ್ನುವ ಚಿತ್ರಕ್ಕೂ ಬಿಂದು ಸಂಗೀತ ಸಂಯೋಜಿಸಿದ್ದಾರೆ.

Kannada Audio Book has Achyuth Kumar reading story from Vivek Shanbhag Kannada Book
KN
Share via
Copy link