Questions? Call
Questions? Call
ಲೇಖಕರು : ಪೂರ್ಣ ಚಂದ್ರ ತೇಜಸ್ವಿ
Tejaswi is a popular Kannada writer who is known for his wit and humor. Not just Poornachandra Tejaswi’s stories and novels his writing on subjects related to birds and science simply have secured a permanent place in the hearts of Kannada readers. His major works are Karvaalo, Chidambara Rahasya, Jugaari Cross, Mayaloka to name a few. His story Dare Devil Mustafa has been chosen for this Kannada audiobook.
ಓದಿದವರು : ಸುಚೇಂದ್ರ ಪ್ರಸಾದ್
ಸ್ವಚ್ಚ ಕನ್ನಡವನ್ನ ಮಾತನಾಡುವ ಸುಚೆಂದ್ರ ಪ್ರಸಾದ್ ಕರ್ನಾಟಕದ ಪ್ರಬುದ್ಧ ನಟ, ನಿರ್ದೇಶಕ. ಬೆಟ್ಟದ ಜೀವ, ಡ್ರಾಮಾ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸುಚೇಂದ್ರ ಪ್ರಸಾದ್ ಪ್ರಪಾತ ಎಂಬ ಚಿತ್ರವನ್ನೂ ನಿರ್ದೇಶಿಸಿದ್ದಾರೆ.
ಹಿನ್ನಲೆ ಸಂಗೀತ : ಅವಿನಾಶ್ & ಶ್ರೀರಾಮ್
ಫೈಯಾಜ್ ಖಾನ್ ಅವರ ಶಿಷ್ಯಂದಿರಾದ ಇವರಿಬ್ಬರು ಕಳೆದ ಎರಡು ವರ್ಷಗಳ ಹಿಂದೆ, ತಮ್ಮ ಸಂಗೀತದ ಪಯಣವನ್ನು ಪ್ರಾರಂಭಿಸಿದರು. ಜರ್ಮನ್ ಕೇಳುಗರಿಗಾಗಿ ಹೊರ ತಂದ ಧ್ಯಾನ ಸಂಗೀತದ ಆಲ್ಬಮ್, ಇವರ ಸಂಗೀತದ ಕೃಷಿಯಲ್ಲಿ ಮುಖ್ಯವಾದದ್ದು. ‘ಉಸಿರಿಗಿಂತ ನೀನೇ ಹತ್ತಿರ’ ಎಂಬ ಇನ್ನೂ ಬಿಡುಗಡೆಯಾಗದ ಹೊಸ ಕನ್ನಡ ಚಲನಚಿತ್ರದಲ್ಲಿ ಇವರಿಬ್ಬರೂ ನೀಡಿರುವ ಸಂಗೀತ, ಕೇಳುಗರ ಮನ ತಣಿಸಲು ಕಾಯುತ್ತಿದೆ.
ಲೇಖಕರು: ವಸುಧೇಂದ್ರ
ಸಮಕಾಲೀನ ಕನ್ನಡ ಸಾಹಿತ್ಯದ ಬಹು ಮುಖ್ಯ ಕತೆಗಾರ ವಸುಧೇಂದ್ರ. ಕನ್ನಡ ಪ್ರಬಂಧ ಪ್ರಕಾರದಲ್ಲೂ ಸಾಕಷ್ಟು ಕೆಲಸ ಮಾಡಿರುವ ವಸುಧೇಂದ್ರ ಛಂದ ಪ್ರಕಾಶನದ ಮೂಲಕ ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಮ್ಮಮ್ಮ ಅಂದ್ರೆ ನಂಗಿಷ್ಟ ಅವರ ಪ್ರಮುಖ ಪ್ರಬಂಧಗಳ ಸಂಕಲನ. ಮನೀಷೆ, ಉಗಾದಿ, ಚೇಳು, ಹಂಪಿ ಎಕ್ಸ್ ಪ್ರೆಸ್ ಇವರ ಪ್ರಮುಖ ಕಥಾ ಸಂಕಲನಗಳು. ಹರಿಚಿತ್ತ ಸತ್ಯ ಅವರ ಮೊದಲ ಕಾದಂಬರಿ. ಇತ್ತೀಚಿಗೆ ಬರೆದ ತೇಜೋ ತುಂಗಭದ್ರಾ ಐತಿಹಾಸಿಕ ಕಾದಂಬರಿ ಸಾಕಷ್ಟು ಹೆಸರು ಮಾಡಿದೆ. ಈ ಯೋಜನೆಗಾಗಿ ಅವರ ಕೆಂಪು ಗಿಣಿ ಕತೆಯನ್ನ ಆರಿಸಿಕೊಳ್ಳಲಾಗಿದೆ. ಮಿಥುನ ಕಥಾ ಸಂಕಲನವನ್ನ ತೆಲುಗಿನಿಂದ ಅನುವಾದಿಸಿದ್ದಾರೆ.
ಓದಿದವರು: ಕಿಶೋರ್
ಕನ್ನಡದ ಪ್ರತಿಭಾವಂತ ಕಲಾವಿದ ಕಿಶೋರ್. ಜನಪ್ರಿಯ ಕನ್ನಡ ಸಿನೆಮಾಗಳಲ್ಲಿ ಮಾತ್ರವಲ್ಲ ತಮಿಳಿನಲ್ಲೂ ಸಾಕಷ್ಟು ಚಿತ್ರಗಳನ್ನ ನಿರ್ವಹಿಸಿದ್ದಾರೆ. ದುನಿಯಾ, ಪೊಲ್ಲಾದವನ್, ರಾಕ್ಷಸ, ಕಬಡ್ಡಿ, ಜಟ್ಟ, ಉಳಿದವರು ಕಂಡಂತೆ, ಆಡುಕಳಮ್ ಇವರು ಅಭಿನಯಿಸಿದ ಪ್ರಮುಖ ಚಿತ್ರಗಳು. ಮೂಲತಃ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಕಿಶೋರ್ ಇಂದು ಕನ್ನಡದ ಮಹತ್ವದ ಕಲಾವಿದರಾಗಿ ರೂಪುಗೊಂಡಿದ್ದಾರೆ. ರಾಕ್ಷಸ ಚಿತ್ರದ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಕೂಡ ಕಿಶೋರ್ ಅವರಿಗೆ ಸಂದಿದೆ. ಈ ಕಥಾ ಶ್ರಾವ್ಯದಲ್ಲವರು ವಸುಧೇಂದ್ರ ಅವರ ಕೆಂಪು ಗಿಣಿ ಕತೆಯನ್ನ ಓದಿದ್ದಾರೆ.
ಹಿನ್ನೆಲೆ ಸಂಗೀತ: ಹರ್ಷ ವರ್ಧನ್ ರಾಜ್
ಹರ್ಷವರ್ಧನ್ ರಾಜ್ ಅವರು ಬಹಳಷ್ಟು ಸಂಗೀತ ನಿರ್ದೇಶಕರೊಡನೆ ಕೆಲಸ ಮಾಡಿದ್ದಾರೆ ಮತ್ತು ಒಳ್ಳೆಯ ಕೀ ಬೋರ್ಡ್ ಪ್ಲೇಯರ್. ಸಂಗೀತ ಸಾಧನೆಯಲ್ಲಿಯೇ ತಮ್ಮ ಬಹುತೇಕ ಸಮಯವನ್ನು ಕಳೆಯುವುದು ಅವರ ನೆಚ್ಚಿನ ಕೆಲಸ.
ಲೇಖಕರು: ರವಿ ಬೆಳಗೆರೆ
ಕನ್ನಡದ ವೈಬ್ರೆಂಟ್ ಪತ್ರಕರ್ತ ಮತ್ತು ಲೇಖಕ ರವಿ ಬೆಳಗೆರೆ. ತಮ್ಮ ಸೂಜಿಮೊನೆಯಂತಹ ಬರವಣಿಗೆಗಳಿಂದ ಸಾಕಷ್ಟು ಯುವ ಮನಸ್ಸುಗಳನ್ನ ತಟ್ಟಿದ ಬರಹಗಾರ ರವಿ. ಹಾಯ್ ಬೆಂಗಳೂರು ಪತ್ರಿಕೆ, ಸಿನೆಮಾ ನಟನೆ, ಕಿರುತೆರೆ, ಸಾಮಾಜಿಕ ಕಾರ್ಯಗಳು ಹೀಗೇ ದೈತ್ಯನಂತೆ ಕೆಲಸ ಮಾಡುವ ರವಿ ಕನ್ನಡದ ಅಪರೂಪದ ಪ್ರತಿಭೆ. ರವಿ ಬೆಳೆಗೆರೆಯವರ ಪಾ ವೆಂ ಹೇಳಿದ ಕತೆ ಸಂಕಲನದಿಂದ ಮಸೀದಿ ಬಿದ್ದ ಮೂರನೇ ದಿನ ಕತೆಯನ್ನ ಆಯ್ದುಕೊಂಡಿದ್ದೇವೆ. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದಾರೆ. `ಪ್ರಾರ್ಥನಾ` ಇವರು ಕಟ್ಟಿರುವ ಶಾಲೆ. ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. ಹಿರಿಯರಾದ ಶಿವರಾಮ ಕಾರಂತರ ಹೆಸರಿನ ಎರಡು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಪತ್ರಿಕೋದ್ಯಮದಲ್ಲಿನ ಇವರ ಸಾಧನೆಗೆ ಪ್ರಶಸ್ತಿ ನೀಡಿದ್ದಾರೆ. ಅಂತೆಯೇ ಕರ್ನಾಟಕ ರಾಜ್ಯ ಸರ್ಕಾರವು ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.
ಓದಿದವರು: ಟಿ ಎಸ್ ನಾಗಾಭರಣ
ಕನ್ನಡದ ಮಹತ್ವದ ನಿರ್ದೇಶಕ ನಾಗಾಭರಣ. ಕಲಾತ್ಮಕ ಮತ್ತು ಜನಪ್ರಿಯ ಸಿನೆಮಾಗಳನ್ನ ಬೆಸೆಯುವ ತಮ್ಮದೇ ಶೈಲಿಯಲ್ಲಿ ಸಿನೆಮಾ ಕೊಟ್ಟವರು ನಾಗಾಭರಣ. ಚಿನ್ನಾರಿಮುತ್ತ, ನಾಗಮಂಡಲ, ಜನುಮದ ಜೋಡಿ, ಆಸ್ಫೋಟ, ಸಂತ ಶಿಶುನಾಳ ಶರೀಫ ಇವರ ಕೆಲವು ಪ್ರಮುಖ ಕಲಾಕೃತಿಗಳು. ಇವರು ನಿರ್ದೇಶಿಸಿರುವ ಸುಮಾರು ಮೂವತ್ತು ಚಿಲ್ಲರೆ ಸಿನೆಮಾಗಳಲ್ಲಿ ಹದಿನಾಲ್ಕು ಸಿನೆಮಾಗಳು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನ ಗಳಿಸಿವೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸ್ಥಾಪಿತ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಟಿ ಎಸ್ ನಾಗಾಭರಣ ಕರ್ನಾಟಕದ ಅಮೂಲ್ಯ ಆಸ್ತಿ. ಈ ಕಥಾ ಶ್ರಾವ್ಯ ಯೋಜನೆಯಲ್ಲಿ ಅವರು ನಮಗಾಗಿ ಕನ್ನಡದ ಬೆಸ್ಟ್ ಸೆಲ್ಲರ್ ಗಳಲ್ಲಿ ಒಬ್ಬರಾಗಿರುವ ರವಿ ಬೆಳಗೆರೆಯವರ 'ಮಸೀದಿ ಬಿದ್ದ ಮೂರನೇ ದಿನ' ಕತೆಯನ್ನ ಓದಿದ್ದಾರೆ.
ಹಿನ್ನೆಲೆ ಸಂಗೀತ: ಕೀರ್ತನ್
ಕೀರ್ತನ್, ಯುವಿಸಿಇ ಯಲ್ಲಿ ಇಂಜಿನಿಯರಿಂಗ್ ಓದಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ಪ್ರವೃತ್ತಿಯಿಂದ ಸಂಗೀತಗಾರ. ಇವರು ಚಿಕ್ಕಂದಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದು, ಈಗ್ಗೆ ೫ ವರ್ಷಗಳಿಂದ ಜಾಹೀರಾತುಗಳನ್ನು ನಿರ್ಮಿಸುವುದು, ‘ಸ್ಯಾಂಡಲ್ ವುಡ್ ಸರಿಗಮ’ ದಂತಹ ನಾಟಕಗಳಿಗೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಪ್ರವೃತ್ತಿಯನ್ನೇ ವೃತ್ತಿ ಮಾಡಿಕೊಳ್ಳುವ ಉದ್ದೇಶ ಕೂಡ ಇವರಿಗಿದೆ.
ಲೇಖಕರು: ನಾ ಡಿಸೋಜಾ
ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ ಡಿಸೋಜಾ ಕನ್ನಡದ ಹಿರಿಯ ಬರಹಗಾರ. ತಮ್ಮ ಕತೆ, ಕಾದಂಬರಿಗಳಿಂದ ಜನಪ್ರಿಯತೆ ಗಳಿಸಿರುವ ನಾ ಡಿ ಯವರ ಮತ್ತೊಂದು ಹೆಮ್ಮೆಯ ಕೆಲಸ ಮಕ್ಕಳ ಬರಹಗಳು. ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತು ಗಂಭೀರವಾಗಿ ಬರೆಯುತ್ತಿರುವ ಕೆಲವೇ ಲೇಖಕರಲ್ಲಿ ನಾ ಡಿ ಕೂಡ ಒಬ್ಬರು. ಮುಳುಗಡೆ, ದ್ವೀಪ ಅವರ ಪ್ರಮುಖ ಕಾದಂಬರಿಗಳು. ಅವರು ಮಕ್ಕಳ ಸಾಹಿತ್ಯಕ್ಕಾಗಿ ಮಾಡಿರುವ ಕೆಲಸವನ್ನ ಗೌರವಿಸುತ್ತ ಅವರ ಎರಡು ಮಕ್ಕಳ ಕತೆಗಳನ್ನ ಇಲ್ಲಿ ಬಳಸಿಕೊಳ್ಳಲಾಗಿದೆ.
ಕನ್ನಡ ಸುಗಮ ಸಂಗೀತದ ಚಿರಪರಿಚಿತ ಹೆಸರು ಎಮ್ ಡಿ ಪಲ್ಲವಿ. ಸಾಕಷ್ಟು ಸಿನೆಮಾಗಳಲ್ಲೂ ಅಭಿನಯಿಸಿರುವ ಇವರು ಮಾಯಾಮೃಗದ ತಮ್ಮ ಪಾತ್ರದಿಂದ ರಾಜ್ಯಾದ್ಯಂತ ಜನಪ್ರಿಯರಾದವರು. ಗರ್ವ ಆಕೆಯ ಅಭಿನಯದ ಇನ್ನೊಂದು ಶ್ರೇಷ್ಠ ಧಾರಾವಾಹಿ. ದುನಿಯಾ ಚಿತ್ರದ ನೋಡಯ್ಯ ಕ್ವಾಟೆ ಲಿಂಗವೇ ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಂಗಭೂಮಿಯಲ್ಲೂ ಸಾಕಷ್ಟು ಕೆಲಸ ಮಾಡಿರುವ ಇವರು ಹ್ಯಾಮ್ಲೆಟ್, ಮಾನಿಷಾದ, ಅಗ್ನಿ ಮತ್ತು ಮಳೆಯಂತಹ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿಯವರ ಸ್ಟಂಬಲ್ ಚಿತ್ರದಲ್ಲಿ ಅಭಿನಯದ ಜೊತೆಗೆ ಚಿತ್ರಕತೆ ಮತ್ತು ನಿರ್ದೇಶನ ವಿಭಾಗದಲ್ಲೂ ದುಡಿದಿದ್ದಾರೆ. ಈ ಕಥಾ ಶ್ರಾವ್ಯ ಯೋಜನೆಯಲ್ಲಿ ನಾ ಡಿಸೋಜಾರ ಎರಡು ಮಕ್ಕಳ ಕತೆಗಳನ್ನ ನಮಗಾಗಿ ಓದಿದ್ದಾರೆ.
ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಶ್ರೀಕಾಂತ್ ಅವರು ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್. ಒಗಟುಗಳನ್ನು ಬಿಡಿಸುವುದು, ತಂತ್ರಜ್ಞಾನದ ಬಗ್ಗೆ ಅರಿತುಕೊಳ್ಳುವುದು ಹಾಗೂ ಛಾಯಾಗ್ರಹಣ ಇವರ ಆಸಕ್ತಿಗಳು. ಇವೆಲ್ಲದರ ಜೊತೆಗೆ ಸಂಗೀತ ನಿರ್ದೇಶನ ಅದರಲ್ಲೂ ಹಿನ್ನೆಲೆ ಸಂಗೀತದತ್ತ ಇವರಿಗೆ ಅಪಾರ ಒಲವಿದೆ.
ಲೇಖಕರು: ನಾ ಡಿಸೋಜಾ
ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ ಡಿಸೋಜಾ ಕನ್ನಡದ ಹಿರಿಯ ಬರಹಗಾರ. ತಮ್ಮ ಕತೆ, ಕಾದಂಬರಿಗಳಿಂದ ಜನಪ್ರಿಯತೆ ಗಳಿಸಿರುವ ನಾ ಡಿ ಯವರ ಮತ್ತೊಂದು ಹೆಮ್ಮೆಯ ಕೆಲಸ ಮಕ್ಕಳ ಬರಹಗಳು. ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತು ಗಂಭೀರವಾಗಿ ಬರೆಯುತ್ತಿರುವ ಕೆಲವೇ ಲೇಖಕರಲ್ಲಿ ನಾ ಡಿ ಕೂಡ ಒಬ್ಬರು. ಮುಳುಗಡೆ, ದ್ವೀಪ ಅವರ ಪ್ರಮುಖ ಕಾದಂಬರಿಗಳು. ಅವರು ಮಕ್ಕಳ ಸಾಹಿತ್ಯಕ್ಕಾಗಿ ಮಾಡಿರುವ ಕೆಲಸವನ್ನ ಗೌರವಿಸುತ್ತ ಅವರ ಎರಡು ಮಕ್ಕಳ ಕತೆಗಳನ್ನ ಇಲ್ಲಿ ಬಳಸಿಕೊಳ್ಳಲಾಗಿದೆ.
ಕನ್ನಡ ಸುಗಮ ಸಂಗೀತದ ಚಿರಪರಿಚಿತ ಹೆಸರು ಎಮ್ ಡಿ ಪಲ್ಲವಿ. ಸಾಕಷ್ಟು ಸಿನೆಮಾಗಳಲ್ಲೂ ಅಭಿನಯಿಸಿರುವ ಇವರು ಮಾಯಾಮೃಗದ ತಮ್ಮ ಪಾತ್ರದಿಂದ ರಾಜ್ಯಾದ್ಯಂತ ಜನಪ್ರಿಯರಾದವರು. ಗರ್ವ ಆಕೆಯ ಅಭಿನಯದ ಇನ್ನೊಂದು ಶ್ರೇಷ್ಠ ಧಾರಾವಾಹಿ. ದುನಿಯಾ ಚಿತ್ರದ ನೋಡಯ್ಯ ಕ್ವಾಟೆ ಲಿಂಗವೇ ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಂಗಭೂಮಿಯಲ್ಲೂ ಸಾಕಷ್ಟು ಕೆಲಸ ಮಾಡಿರುವ ಇವರು ಹ್ಯಾಮ್ಲೆಟ್, ಮಾನಿಷಾದ, ಅಗ್ನಿ ಮತ್ತು ಮಳೆಯಂತಹ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿಯವರ ಸ್ಟಂಬಲ್ ಚಿತ್ರದಲ್ಲಿ ಅಭಿನಯದ ಜೊತೆಗೆ ಚಿತ್ರಕತೆ ಮತ್ತು ನಿರ್ದೇಶನ ವಿಭಾಗದಲ್ಲೂ ದುಡಿದಿದ್ದಾರೆ. ಈ ಕಥಾ ಶ್ರಾವ್ಯ ಯೋಜನೆಯಲ್ಲಿ ನಾ ಡಿಸೋಜಾರ ಎರಡು ಮಕ್ಕಳ ಕತೆಗಳನ್ನ ನಮಗಾಗಿ ಓದಿದ್ದಾರೆ.
ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಶ್ರೀಕಾಂತ್ ಅವರು ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್. ಒಗಟುಗಳನ್ನು ಬಿಡಿಸುವುದು, ತಂತ್ರಜ್ಞಾನದ ಬಗ್ಗೆ ಅರಿತುಕೊಳ್ಳುವುದು ಹಾಗೂ ಛಾಯಾಗ್ರಹಣ ಇವರ ಆಸಕ್ತಿಗಳು. ಇವೆಲ್ಲದರ ಜೊತೆಗೆ ಸಂಗೀತ ನಿರ್ದೇಶನ ಅದರಲ್ಲೂ ಹಿನ್ನೆಲೆ ಸಂಗೀತದತ್ತ ಇವರಿಗೆ ಅಪಾರ ಒಲವಿದೆ.
ಲೇಖಕರು: ವಿಕ್ರಮ್ ಹತ್ವಾರ್
ಕನ್ನಡದ ಯುವ, ಕವಿ ಲೇಖಕ ವಿಕ್ರಮ್ ಹತ್ವಾರ್. ಜಿರೋ ಮತ್ತು ಒಂದು ಅವರ ಪ್ರಥಮ ಕಥಾ ಸಂಕಲನ. ಕನ್ನಡ ಪ್ರಭ ಮತ್ತು ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಹಲವು ವರ್ಷ ಪ್ರಶಸ್ತಿಗಳನ್ನ ಗಳಿಸಿದ್ದಾರೆ . ಅವರ ಪ್ರಥಮ ಕಥಾ ಸಂಕಲನದಿಂದ ಆಯ್ದ ಕಾಯಕವೆ ಕೈಲಾಸ ಕತೆಯನ್ನಿಲ್ಲಿ ಬಳಸಿಕೊಳ್ಳಲಾಗಿದೆ.
ಯುವ ಸಿನೆಮಾ ತಾರೆ ಮತ್ತು ನಿರ್ದೇಶಕ. ಕನ್ನಡದ ಸದ್ಯದ ಚರ್ಚಿತ ಸಿನೆಮಾ ಉಳಿದವರು ಕಂಡಂತೆ ಚಿತ್ರದ ನಿರ್ದೇಶಕ ರಕ್ಷಿತ್ ಶೆಟ್ಟಿ. ತುಘಲಕ್, ನಮ್ಮ ಏರಿಯಾಲಿ ಒಂದ್ ದಿನ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ವಾಸ್ತು ಪ್ರಕಾರ ಇವರ ಅಭಿನಯದ ಇನ್ನಷ್ಟು ಪ್ರಮುಖ ಚಿತ್ರಗಳು. ಕನ್ನಡದ ಯುವ ಕತೆಗಾರ ವಿಕ್ರಮ್ ಹತ್ವಾರರ ಕಾಯಕವೇ ಕೈಲಾಸ ಕತೆಯನ್ನ ನಮಗಾಗಿ ರಕ್ಷಿತ್ ಓದಿದ್ದಾರೆ.
ನದೀಮ್ ಮತ್ತು ರಾಜೇಶ್ - ಬೆಂಗಳೂರಿನಲ್ಲಿರುವ ಯುವ ಸಂಗೀತ ನಿರ್ದೇಶಕರು. ಸಂಗೀತದತ್ತ ಅಪಾರ ಆಸಕ್ತಿಯನ್ನಿರಿಸಿಕೊಂಡಿರುವ ಸಾಫ್ಟ್ ವೇರ್ ಇಂಜಿನಿಯರ್ಸ್. "ನನ್ನ ಕನಸಲಿ’ ಎಂಬ ಇವರ ನಿರ್ದೇಶನದ ಹಾಡು, ಯೂ ಟ್ಯೂಬ್ ಮತ್ತು ಫೇಸ್ ಬುಕ್ಕಿನಲ್ಲಿ ಕೇಳುಗರಿಗೆ ಆನಂದ ನೀಡಿತ್ತು. ನಂತರ ‘ಸುಳ್ಳೇ ಸತ್ಯ’ ಎಂಬ ಕಿರುಚಿತ್ರದ ಎರಡು ಹಾಡುಗಳಿಗೆ ಕೂಡ ಸಂಗೀತ ನೀಡಿದರು. ಈ ಕಿರುಚಿತ್ರವು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಈಗ ದಕ್ಷಿಣಭಾರತದ ಕೆಲವು ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವುದಲ್ಲದೆ, ಆನೇಕ ಆನ್ಲೈನ್ ಸಂಗೀತಕ್ಕೆ ನೆರವು ನೀಡುತ್ತಿದ್ದಾರೆ
ಲೇಖಕರು: ಜಯಂತ ಕಾಯ್ಕಿಣಿ
ಚಿಕ್ಕ ವಯಸ್ಸಿನಲ್ಲೇ ಅಕಾಡೆಮಿಯಿಂದ ಯುವ ಕವಿ ಪ್ರಶಸ್ತಿ ಪಡೆದ ಜಯಂತ ಕಾಯ್ಕಿಣಿ ಗೋಕರ್ಣದವರು. ಸಾಹಿತ್ಯ, ಸಿನೆಮಾ ಇವರ ಆಸಕ್ತಿಯ ಕ್ಷೇತ್ರಗಳು. ತಮ್ಮ ವಿಶಿಷ್ಠ ಸಂವೇದನೆಗಳ ಸಣ್ಣ ಕತೆಗಳಿಂದ ತಮ್ಮದೇ ಓದುಗರನ್ನ ಸೃಷ್ಟಿಸಿಕೊಂಡ ಜಯಂತ ಸದ್ಯದ ಕನ್ನಡದ ಜನಪ್ರಿಯ ಕವಿ. ರಂಗದೊಂದಿಷ್ಟು ದೂರ, ಕೋಟಿ ತೀರ್ಥ, ನೀಲಿ ಮಳೆ, ತೆರೆದಷ್ಟೇ ಬಾಗಿಲು, ತೂಫಾನ್ ಮೇಲ್, ಬೊಗಸೆಯಲ್ಲಿ ಮಳೆ ಇವರ ಕೆಲವು ಜನಪ್ರಿಯ ಕೃತಿಗಳು. ಕನ್ನಡ ಸಿನೆಮಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಮುಂಗಾರು ಮಳೆಯ ಹೆಚ್ಚಿನ ಹಾಡುಗಳನ್ನ ರಚಿಸಿದ ಜಯಂತ ಕಾಯ್ಕಿಣಿ ಕುವೆಂಪು, ರಾಜಕುಮಾರರ ಕುರಿತು ನಡೆಸಿಕೊಟ್ಟ ನಮಸ್ಕಾರ ಕಾರ್ಯಕ್ರಮಗಳು ಅವರ ಗಮನಾರ್ಹ ಸಾಧನೆಗಳು. ಅವರ ದಗಡೂ ಪರಭನ ಕತೆಯನ್ನ ಈ ಶ್ರಾವ್ಯ ಸಂಚಿಕೆಗೆ ಆಯ್ದುಕೊಳ್ಳಲಾಗಿದೆ.
ಓದಿದವರು: ಪ್ರಕಾಶ್ ರೈ
ಭಾರತೀಯ ಚಿತ್ರರಂಗಕ್ಕೆ ಕನ್ನಡ ರಂಗಭೂಮಿ ಕೊಟ್ಟ ಅಪರೂಪದ ಕೊಡುಗೆ ಪ್ರಕಾಶ್ ರೈ. ಬಹುಮುಖಿ ನಟ, ನಿರ್ದೇಶಕ, ನಿರ್ಮಾಪಕ. ಕನ್ನಡದಲ್ಲಿ ನಾನೂ ನನ್ನ ಕನಸು ಮತ್ತು ಒಗ್ಗರಣೆ ನಿರ್ದೇಶಿಸಿರುವ ಪ್ರಕಾಶ್ ಸಾಕಷ್ಟು ಪ್ರಬುದ್ಧ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಇರುವರ್ ಮತ್ತು ಕಾಂಚೀವರಂ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವ ಪ್ರಕಾಶ್ ರೈ ನಮ್ಮ ನಡುವಿನ ದೈತ್ಯ ಪ್ರತಿಭೆ. ಕನ್ನಡ, ತೆಲುಗು, ತಮಿಳು, ಮರಾಠಿ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಅಭಿನಯಿರುವ ಪ್ರಕಾಶ್ ರೈ. ಕನ್ನಡದ ಶ್ರೇಷ್ಥ ಕತೆಗಾರರಲ್ಲೊಬ್ಬರಾಗಿರುವ ಜಯಂತ ಕಾಯ್ಕಿಣಿಯವರ ದಗಡೂ ಪರಬನ ಅಶ್ವಮೇಧ ಕತೆಯನ್ನ ಈ ಯೋಜನೆಗಾಗಿ ಓದಿದ್ದಾರೆ.
ಹಿನ್ನೆಲೆ ಸಂಗೀತ: ಎಸ್ ಆರ್ ರಾಮಕೃಷ್ಣ
ಅನೇಕ ನಾಟಕಗಳು, ಸಿನೆಮಾಗಳು ಮತ್ತು ದೂರದರ್ಶನದ ಹಲವಾರು ಕಾರ್ಯಕ್ರಮಗಳಿಗೆ ಸಂಗೀತ ನೀಡಿರುವ ರಾಮಕೃಷ್ಣರವರು, ಕನ್ನಡ ಚಿತ್ರಗಳು ಮತ್ತು ನಾಟಕಗಳ ಹೆಸರಾಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ನಾಗಭರಣ, ಟಿ. ಎಸ್. ರಂಗ, ಎನ್. ಎಸ್. ಶಂಕರ್, ನಟರಾಜ್ ಹೊನ್ನವಳ್ಳಿ, ಸುರೇಶ್ ಅನಗಳ್ಳಿ, ಪ್ರಸನ್ನ, ಕೆ. ಎಮ್ ಚೈತನ್ಯ, ಎನ್. ಸುದರ್ಶನ್ ಹಾಗೂ ಪ್ರಕಾಶ್ ಬಾಬು ಮುಂತಾದವರೊಡನೆ ಕೆಲಸ ಮಾಡಿದ್ದಾರೆ. ಅನೇಕ ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರರೊಂದಿಗೆ ಹಾರ್ಮೋನಿಯಮ್ ನ ಸಾರಥ್ಯ ವಹಿಸಿರುವ ಇವರು ‘ವಚನ ಬ್ಯಾಂಡ್’ ಎಂಬ ೧೨ನೇ ಶತಮಾನದ ವಚನಗಳನ್ನು, ವರ್ತಮಾನದಲ್ಲಿ ಸಂಗೀತವನ್ನು ಅಳವಡಿಸಿ ಹಾಡುವ ಸಂಸ್ಥೆಯನ್ನು ಹುಟ್ಟುಹಾಕಿದವರಲ್ಲೊಬ್ಬರು. ಸಿದ್ದಲಿಂಗಯ್ಯನವರ ಆತ್ಮಚರಿತ್ರೆಯನ್ನು (A Word with you, world) ಮತ್ತು ಕೃಪಾಕರ ಸೇನಾನಿಯವರ ಅಪಹರಣದ ಕಥೆ (Birds, Beasts and Bandits) ಯನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಭಾರತ ಮತ್ತು ವಿದೇಶಗಳ ಅನೇಕ ವಿಶ್ವವಿದ್ಯಾಲಯಗಳಲ್ಲಿ ಇವರ ಈ ಅನುವಾದಗಳನ್ನು ಪಠ್ಯವನ್ನಾಗಿಸಿ ಬೋಧಿಸುತ್ತಿದ್ದಾರೆ
ಲೇಖಕರು: ದೇವನೂರು ಮಹಾದೇವ
ಬರೆದದ್ದು ಕಡಿಮೆ ಎನಿಸಿದರೂ ಕನ್ನಡ ಸಾಹಿತ್ಯದ ಮೇಲೆ ಅಪಾರ ಪ್ರಭಾವ ಬೀರಿರುವ ದೇವನೂರು ಮಹಾದೇವ ನಾಡಿನ ಸಾಕ್ಷಿಪ್ರಜ್ಞೆಗಳಲ್ಲೊಬ್ಬರು. ಕನ್ನಡ ಕಥಾಸಾಹಿತ್ಯಕ್ಕೆ ಹೊಸ ದಿಕ್ಕು-ದೆಸೆಗಳನ್ನು ತೋರಿಸಿದ ದೇವನೂರ ಮಹಾದೇವ ನವ್ಯೋತ್ತರ ಸಾಹಿತ್ಯ ಸಂದರ್ಭದ ಅಗ್ರಗಣ್ಯ ಲೇಖಕರು. ಹುಟ್ಟಿದ್ದು ಜೂನ್ ೬, 1948ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ. (ಕನ್ನಡ) ಪದವಿ (1974), 'ನರ' ಪತ್ರಿಕೆಯ ಸಂಪಾದಕರಾಗಿದ್ದರು. (1972-74), ದ್ಯಾವನೂರು ಕಥಾಸಂಕಲನ (1973), ಒಡಲಾಳ, ಕುಸುಮಬಾಲೆ (ಕಾದಂಬರಿಗಳು). 'ಒಡಲಾಳ' ಕಾದಂಬರಿಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ (1984) ಬಂದಿದೆ. ಗಾಂಧಿ ಮತ್ತು ಮಾವೋ ಕೃತಿ ಅನುವಾದ ಕೂಡ ಮಾಡಿದ್ದಾರೆ.
ಓದಿದವರು: ಧನಂಜಯ
ಡಾಲಿ ಧನಂಜಯ ಕನ್ನಡ ಮತ್ತು ಭಾರತೀಯ ಸಿನಿಮಾದ ಜನಪ್ರಿಯ ನಟ ಮತ್ತು ರಂಗ ಕಲಾವಿದ. ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ ನಂತರ 2013 ರಲ್ಲಿ, ಡೈರೆಕ್ಟ್ರ್ಸ್ ಸ್ಪೆಷಲ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಅರಸೀಕೆರೆ ಬಳಿ ಕಲ್ಲೇನಹಳ್ಳಿ ಗ್ರಾಮದಲ್ಲಿ ಜನಿಸಿ, ಸೇಂಟ್ ಮೇರಿಸ್ ಹೈ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಮುಂದೆ ಎಂಜಿನೀಯರಿಂಗ್ ಓದಿದರು. ಟಗರು, ಅಲ್ಲಮ, ಪಾಪ್ಕಾರ್ನ್ ಮಂಕಿ, ಟೈಗರ್ ಮುಂತಾದ ಚಿತ್ರಗಳಿಂದ ಈಗಾಗಲೇ ಬಾಕ್ಸ್ ಆಫೀಸ್ ಮತ್ತು ಚಿತ್ರ ವಿಮರ್ಶಕರ ಮನ ಎರಡನ್ನೂ ಗೆದ್ದಿದ್ದಾರೆ. ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದ ಇವರ ವಿಶೇಷ ಪಾತ್ರ ಎಲ್ಲರೂ ಇವರನ್ನು ಪ್ರೀತಿಯಿಂದ ಸ್ಪೆಷಲ್ ಆಕ್ಟರ್ ಎಂದು ಕರೆಯುವಂತೆ ಮಾಡಿದೆ. ಅಲ್ಲದೆ ಇವರು ಆಯ್ಕೆ ಮಾಡಿಕೊಳ್ಳುವ ಕ್ಲಾಸಿಕ್ ಸಿನಿಮಾಗಳಿಂದ ಮತ್ತು ನಾಟಕಗಳಿಂದ ಕ್ಲಾಸಿಕ್ ಆಕ್ಟರ್ ಎಂದೂ ಗುರುತಿಸಲ್ಪಡುತ್ತಾರೆ. ಟಗರು ಚಿತ್ರ ಇವರಿಗೆ ಜನಮನ್ನಣೆ ಮತ್ತು ಅಭಿಮಾನಿಗಳ ಪ್ರೀತಿಯನ್ನು ತಂದು ಕೊಟ್ಟಿದೆ.
ಸಂಗೀತ : ಕೆ ಜಿ ಶ್ರೀಕಾಂತ್
ಶ್ರೀಕಾಂತ್ ಓದಿದ್ದು ಮೆಕ್ಯಾನಿಕಲ್ ಎಂಜಿನೀಯರಿಂಗ್ ಆದರೂ ಸಾಫ್ಟ್ ವೇರ್ ಇಂಜಿನೀಯರ್ ವೃತ್ತಿಯನ್ನೇ ಆರಿಸಿ ಕೊಂಡಿದ್ದಾರೆ. ಒಗಟುಗಳನ್ನು ಬಿಡಿಸುವುದು, ಆಧುನಿಕ ತಂತ್ರಜ್ಞಾನದ ಬಗ್ಗೆ ಕುತೂಹಲ, ಅನ್ವೇಷಣೆ, ಫೋಟೋಗ್ರಫಿ ಇತರೆ ಇವರ ಹವ್ಯಾಸಗಳಾಗಿವೆ. ಅಷ್ಟೇ ಅಲ್ಲದೆ ಸಂಗೀತ ಸಂಯೋಜನೆ ಅದರಲ್ಲೂ ಹಿನ್ನೆಲೆ ಸಂಗೀತ ನಿರ್ದೇಶನದತ್ತ ಅಪಾರ ಒಲವು ಹೊಂದಿದ್ದಾರೆ.
ಲೇಖಕರು: ಕುವೆಂಪು
ಕುವೆಂಪು ಎಂಬ ಕಾವ್ಯನಾಮದಿಂದ ಪ್ರಖ್ಯಾತರಾಗಿರುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕ. ಕನ್ನಡದ ಮನಸ್ಸುಗಳ ಮೇಲೆ ಕುವೆಂಪುರವರಷ್ಟು ಪ್ರಭಾವ ಬೀರಿರುವ ಲೇಖಕ ಇನ್ನೊಬ್ಬರಿಲ್ಲವೇನೋ. ಹುಟ್ಟಿದ್ದು 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ. ಕನ್ನಡ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿದ್ದು (1946) ಮುಂದೆ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ (1956-1960) ನಿವೃತ್ತ ರಾದರು. 'ಶ್ರೀರಾಮಾಯಣದರ್ಶನಂ' ಕಾವ್ಯಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1955) ಮತ್ತು 1967 ರ ಜ್ಞಾನಪೀಠ ಪ್ರಶಸ್ತಿ (1968) ರಾಷ್ಟ್ರಪತಿ ಯಿಂದ 'ಪದ್ಮಭೂಷಣ' (1958) ರಾಜ್ಯ ಸರ್ಕಾರದಿಂದ 'ರಾಷ್ಟ್ರಕವಿ' (1964), ಮೈಸೂರು, ಬೆಂಗಳೂರು, ಕರ್ನಾಟಕ, ಗುಲಬರ್ಗಾ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್, ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರೊಫೆಸರ್ ಇಮೆರಿಟಸ್, ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (1957) - ಅವರು ಪಡೆದ ಇತರ ಮುಖ್ಯ ಗೌರವ ಮತ್ತು ಪ್ರಶಸ್ತಿಗಳು. ಕಾವ್ಯ, ನಾಟಕ, ಕಾದಂಬರಿ, ಸಣ್ಣಕತೆ, ವಿಮರ್ಶೆ, ಜೀವನಚರಿತ್ರೆ, ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ಅರವತ್ತು ಗ್ರಂಥಗಳು ಪ್ರಕಟಣೆಗೊಂಡಿವೆ.
ಓದಿದವರು: :ವಸಿಷ್ಠ ಎನ್ ಸಿಂಹ
ಮೈಸೂರಿನಲ್ಲಿ ಜನಿಸಿದ ವಶಿಷ್ಠ ತಮ್ಮ ವಿಶಿಷ್ಟ ದ್ವನಿ ಮತ್ತು ನಡವಳಿಕೆಯಿಂದಲೇ ಗುರುತಿಸಿಕೊಳ್ಳುವ ಉದಯೋನ್ಮುಖ ನಟ. ಇವರು ಸಿನೆಮಾ ಅಭಿನಯದ ಮೋಹಕ್ಕೆ ಸಿಕ್ಕು ಸಾಫ್ಟ್ ವೇರ್ ಎಂಜಿನಿಯರ್ ಕೆಲಸವನ್ನು ಬಿಟ್ಟು ಕನ್ನಡ ಸಿನೆಮಾ ರಂಗವನ್ನು ಪ್ರವೇಶಿಸಿದವರು. 2012 ರಲ್ಲಿ ತೆರೆ ಕಂಡ ತಮಿಳು ಯಶಸ್ವೀ ಚಿತ್ರ ಸುಂದರಪಾಂಡಿಯನ್ , 2013 ರಲ್ಲಿ ಕನ್ನಡದಲ್ಲಿ ರಾಜಾ ಹುಲಿ ಹೆಸರಿನಲ್ಲಿ ರಿಮೇಕ್ ಆಯಿತು. ಅದರಲ್ಲಿನ ನಾಯಕನ ಪಾತ್ರ ವಶಿಷ್ಠ ಅವರಿಗೆ ಮೊದಲ ಯಶಸ್ಸನ್ನು ತಂದು ಕೊಟ್ಟಿತು. ಮುಂದೆ ಅಲೋನ್ ಎನ್ನುವ ತಮಿಳು ಚಿತ್ರದಿಂದ ನಟನಾಗಿ ಬೆಳೆದರು.
ಹಿನ್ನೆಲೆ ಸಂಗೀತ: ಪ್ರಶಾಂತ್ ಪಚ್ಚಾಟು
Prashanth Pachaatu Music Director: Prashanth is a software developer by profession. However as a classical pianist and singer, he has been associated with music for a few years now and is working on various compositions and independent projects to create a unique space for himself. His compositions bring out a unique blend of western influences along with a Hindustani classical flavour. Juggling along with profession and independent music projects, he is currently pursuing his Piano grades at London College of Music
ಲೇಖಕರು: ವೈದೇಹಿ
ಸ್ತ್ರೀಲೋಕದ ಕಥನವನ್ನು ಗಟ್ಟಿಯಾಗಿ ಕನ್ನಡ ಸಾಹಿತ್ಯಕ್ಕೆ ತೆರೆದಿಟ್ಟ ವೈದೇಹಿಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ. ಹುಟ್ಟಿದ್ದು ೧೯೪೫ ರ ಫೆಬ್ರವರಿ ೧೨ ರಂದು. ವೈದೇಹಿ ಅವರ ಬರಹದ ಸ್ವರೂಪ ವೈವಿಧ್ಯದಿಂದ ಕೂಡಿದೆ. 1979ರಲ್ಲಿ ಮೂಡಿದ ‘ಮರ ಗಿಡ ಬಳ್ಳಿ’ಯಿಂದ ಮೊದಲುಗೊಂಡು, ಅಂತರಂಗದ ಪುಟಗಳು, ಗೋಲ, ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ, ಅಮ್ಮಚ್ಚಿ ಎಂಬ ನೆನಪು, ಹಗಲು ಗೀಚಿದ ನೆಂಟ, ಕ್ರೌಂಚ ಪಕ್ಷಿಗಳು ಇವು ಅವರ ಪ್ರಮುಖ ಕಥಾಸಂಕಲನಗಳು. ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ಬಡಗಿ, ಹರಿವ ನೀರು (ಪ್ರಬಂಧ ಸಂಕಲನಗಳು), ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಸೇಡಿಯಾಪು ನೆನಪುಗಳು, ಮುಂತಾದ ಕೆಲ ಪುಟಗಳು (ಆತ್ಮಚರಿತ್ರ ನಿರೂಪಣೆ), ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ, ಬೆಳ್ಳಿಯ ಸಂಕೋಲೆಗಳು, ಮೂವರು ಅಕ್ಕತಂಗಿಯರು, ಸಂಗೀತ ಸಂವಾದ, ಸೂರ್ಯ ಕಿನ್ನರಿಯರು (ಅನುವಾದ), ಜಾತ್ರೆ (ಸ್ಕೃತಿಕಥನ) ಅವರ ಪ್ರಕಟಿತ ಕೃತಿಗಳು. ಇವಲ್ಲದೆ 15 ಮಕ್ಕಳ ನಾಟಕಗಳು, ಮಕ್ಕಳ ಕಥಾ ಸಂಗ್ರಹ, ಮಕ್ಕಳ ಕಥೆಗಳ ಸಂಪಾದಿತ ಸಂಗ್ರಹ ಪ್ರಕಟಿಸಿದ್ದಾರೆ. ಕ್ರೌಂಚ ಪಕ್ಷಿಗಳು ಎಂಬ ಕಥಾಸಂಕಲನಕ್ಕೆ ೨೦೦೯ರಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.
ಓದಿದವರು: : ಶ್ರುತಿ ಹರಿಹರನ್
ಶ್ರುತಿ ಹರಿಹರನ್ ಸಿನೆಮಾ ನಟಿ ಮತ್ತು ನಿರ್ಮಾಪಕಿಯಾಗಿ ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರುವವರು. ಶ್ರುತಿಯವರಿಗೆ ಒಂದು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ, ಮೂರು ಬಾರಿ ದಕ್ಷಿಣ ಸಿನೆಮಾ ರಂಗದ ಫಿಲಂ ಫೇರ್ ಪ್ರಶಸ್ತಿ, ಒಂದು ಬಾರಿ ಎಸ್ಐಐಎಮ್ಏ ಪ್ರಶಸ್ತಿ ಒಳಗೊಂಡಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಅಷ್ಟೇ ಅಲ್ಲದೆ ನಾತಿಚರಾಮಿ ಚಿತ್ರದಲ್ಲಿನ ಇವರ ಅಭಿನಯವನ್ನು 66 ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿತ್ತು. 2012 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ಕಂಪನಿ ಇವರ ಮೊದಲನೇ ಚಿತ್ರ ಮತ್ತು ಕನ್ನಡದಲ್ಲಿ ಲೂಸಿಯಾ ಇವರ ಮೊದಲ ಚಿತ್ರ. ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ಊರ್ವಿ, ನಾತಿಚರಾಮಿ ಮತ್ತು ಬ್ಯೂಟಿಫುಲ್ ಮನಸುಗಳು ಚಿತ್ರಗಳು ಶ್ರುತಿಯವರಿಗೆ ಚಿತ್ರ ವಿಮರ್ಶಕರ ಮೆಚ್ಚುಗೆ ಮತ್ತು ಜನಮನ್ನಣೆ ಎರಡನ್ನೂ ದೊರಕಿಸಿಕೊಟ್ಟಿವೆ. ಶ್ರುತಿ ನಮಗಾಗಿ ಒಗಟು ಕತೆಯನ್ನು ಓದಿದ್ದಾರೆ.
ಹಿನ್ನೆಲೆ ಸಂಗೀತ: ಕೆ.ಜಿ ಚಂದ್ರಕಾಂತ್
ಚಂದ್ರಕಾಂತ್ ಒಂದು ದೊಡ್ಡ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್-ವೇರ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಾಥಮಿಕ ಹಂತದ ತರಬೇತಿ ಪಡೆದಿರುವ ಚಂದ್ರಕಾಂತ್ ಸಿನೆಮಾ ಮತ್ತು ಸಂಗೀತದ ಕಟ್ಟಾಭಿಮಾನಿ.
ಲೇಖಕರು: ವಿವೇಕ ಶಾನಭಾಗ
ವಿವೇಕ ಶಾನಭಾಗ, ಜನಿಸಿದ್ದು ೧೯೬೨ರಲ್ಲಿ ಶಿರಸಿಯಲ್ಲಿ. ಇಂಜಿನೀಯರಿಂಗ್ ವಿದ್ಯಾಭ್ಯಾಸ. ಕನ್ನಡದ ಮುಖ್ಯ ಕತೆಗಾರರಲ್ಲಿ ಒಬ್ಬರಾದ ಇವರು ಒಟ್ಟು ೧೦ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮೊದಲ ಸಂಕಲನ "ಅಂಕುರ" (೧೯೮೫), ಲಂಗರು (೧೯೯೨), ಹುಲಿ ಸವಾರಿ (೧೯೯೫), ಮತ್ತೊಬ್ಬನ ಸಂಸಾರ (೨೦೦೫) ರಲ್ಲಿ ಪ್ರಕಟವಾದ ಕಥಾಸಂಕಲನಗಳು. "ಘಾಚರ್ ಘೋಚರ್" ಕಿರುಕಾದಂಬರಿ ೨೦೧೩ ರಲ್ಲಿ ಪ್ರಕಟವಾಯಿತು ಮತ್ತು ಇಂಗ್ಲಿಶ್ ಭಾಷೆಗೂ ತರ್ಜುಮೆಗೊಂಡು ಪ್ರಸಿದ್ಧವಾಯಿತು. ಇವರ ಕಾದಂಬರಿಗಳು: ಇನ್ನೂ ಒಂದು (೨೦೦೧), ಒಂದು ಬದಿ ಕಡಲು (೨೦೦೭) ಮತ್ತು ಊರು ಭಂಗ (೨೦೧೫). ಎರಡು ನಾಟಕಗಳನ್ನೂ ಇವರು ಪ್ರಕಟಿಸಿದ್ದಾರೆ. ಅವುಗಳು: "ಸಕ್ಕರೆ ಗೊಂಬೆ" (೧೯೯೯) ಮತ್ತು "ಬಹುಮುಖಿ" (೨೦೦೭). "ದೇಶಕಾಲ" ಎಂಬ ಕನ್ನಡದ ಸಾಹಿತ್ಯಿಕ ತ್ರೈಮಾಸಿಕದ ಸಮ್ಪಾದಕರಾಗಿ, ಅದನ್ನು ೫ ವರ್ಷಗಳ ಕಾಲ ನಡೆಸಿದ್ದರು.
ಓದಿದವರು: : ಅಚ್ಯುತ್ ಕುಮಾರ್
ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿರುವ ಅಚ್ಯುತ್ ಕುಮಾರ್ ಆರಂಭದಲ್ಲಿ ಶಿವಮೊಗ್ಗದ ನೀನಾಸಂ ರಂಗ ಕಲಾವಿದನಾಗಿದ್ದರು. ಗಿರೀಶ್ ಕಾಸರವಳ್ಳಿ 2000 ದಲ್ಲಿ ಗೃಹಭಂಗ ಎಂಬ ತಮ್ಮ ಕಿರುತೆರೆಯ ಧಾರಾವಾಹಿಯ ಒಂದು ಪ್ರಧಾನವಾದ ಪಾತ್ರಕ್ಕಾಗಿ ಇವರನ್ನು ಆಯ್ಕೆ ಮಾಡಿಕೊಂಡಾಗ ಒಬ್ಬ ನಟನಾಗಿ ಗುರುತಿಸಲ್ಪಟ್ಟರು. ಮುಂದೆ ಅಚ್ಯುತ್ ಕುಮಾರ್ ಒಬ್ಬ ಅವಲಂಬಿಸಬಹುದಾದ ನಟನಾಗಿ ಬೆಳೆದು ಹಲವಾರು ಪ್ರಶಸ್ತಿಗಳನ್ನು ಗಳಿಸಿದರು. ಮೂರು ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದಾರೆ ಹಾಗೂ ಶ್ರೇಷ್ಠ ಪೋಷಕ ನಟ, ಶ್ರೇಷ್ಠ ನಟ ಎರಡೂ ವಿಭಾಗಗಳಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಇದುವರೆಗೂ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಚ್ಯುತ್ ಕುಮಾರ್ ನಮಗಾಗಿ ನಿರ್ವಾಣ ಕತೆಯನ್ನು ಓದಿದ್ದಾರೆ.
ಹಿನ್ನೆಲೆ ಸಂಗೀತ: ಬಿಂದು ಮಾಲಿನಿ
ಬಿಂದು ಮಾಲಿನಿ ಭಾರತೀಯ ಚಲನಚಿತ್ರ ರಂಗದಲ್ಲಿ, ಅದರಲ್ಲೂ ಪ್ರಮುಖವಾಗಿ ತಮಿಳು ಸಿನೆಮಾಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಿಂದು ನಾತಿಚರಾಮಿ, ಅರುವಿ ಮುಂತಾದ ಜನಪ್ರಿಯ ಸಿನೆಮಾಗಳಲ್ಲಿ ಕೆಲಸ ಮಾಡಿದ್ದಾರೆ. 2018 ರಲ್ಲಿ ತೆರೆಕಂಡ ನಾತಿಚರಾಮಿ ಇವರ ಸಂಗೀತ ನಿರ್ದೇಶನವಿರುವ ಇತ್ತೀಚಿನ ಸಿನೆಮಾ. ನಿರ್ವಾಣ ಎನ್ನುವ ಚಿತ್ರಕ್ಕೂ ಬಿಂದು ಸಂಗೀತ ಸಂಯೋಜಿಸಿದ್ದಾರೆ.
ಲೇಖಕ: ಯಶವಂತ್ ವಿಠೋಬ ಚಿತ್ತಾಲ
ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಲ್ಲಿ ಅಗಸ್ಟ್ ೩, ೧೯೨೮ ರಂದು ಜನಿಸಿದ ಯಶವಂತ್ ಚಿತ್ತಾಲ ಕನ್ನಡದ ಅನನ್ಯ ಪ್ರತಿಭೆಯ ಬರಹಗಾರ. ಚಿತ್ತಾಲರ ಪುರುಶೋತ್ತಮ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾಗಿದೆ. ಹನೇಹಳ್ಳಿ ಮತ್ತು ಮುಂಬಯಿಯನ್ನು ಬೆಸೆದು ಕತೆಗಳನ್ನು ಬರೆದ ಚಿತ್ತಾಲರು ಕನ್ನಡದ ಕತೆಗಳಿಗೊಂದು ವಿಶಿಷ್ಠ ಹೊಳಪನ್ನ ನೀಡಿದವರು. ೧೯೮೦ ರಲ್ಲಿ ಅವರ ಕತೆಯಾದಳು ಹುಡುಗಿ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತು. ಅದೇ ಸಂಕಲನದ ಕತೆಯಾದಳು ಹುಡುಗಿ ಕತೆಯನ್ನು ಆಡಿಯೋ ಕತೆಗಾಗಿ ಆಯ್ದುಕೊಳ್ಳಲಾಗಿದೆ
ಓದಿದವರು: : ರಾಜ್ ಶೆಟ್ಟಿ
ಮಂಗಳೂರಿನ ರಾಜ್ ಶೆಟ್ಟಿ ಮೊದಲು ರೇಡಿಯೊ ಜಾಕಿಯಾಗಿ ತದನಂತರ ರಂಗಭೂಮಿ ಕಡೆ ಹೊರಳಿದವರು. ಅಲ್ಲಿಂದ ಚಿತ್ರರಂಗದ ಕಡೆ ಮುಖ ಹಾಕಿದ ರಾಜ್ ಶೆಟ್ಟಿಯವರ ಒಂದು ಮೊಟ್ಟೆಯ ಕತೆ ಬ್ಲಾಕ್ ಬಸ್ಟರ್ ಹಿಟ್ ಆಗುವ ಮೂಲಕ ಅವರು ಚಿತ್ರರಂಗದಲ್ಲಿ ನೆಲೆ ನಿಲ್ಲುವಂತಾಯ್ತು. ನಮಗಾಗಿ ರಾಜ್ ಶೆಟ್ಟಿ ಚಿತ್ತಾಲರ ಕತೆಯಾದಳು ಹುಡುಗಿಯನ್ನು ಓದಿದ್ದಾರೆ. https://en.wikipedia.org/wiki/Raj_B._Shetty
ಹಿನ್ನೆಲೆ ಸಂಗೀತ: ಪ್ರಶಾಂತ್ ಪಚ್ಚಾಟು
ಪ್ರಶಾಂತ್ ವೃತ್ತಿಯಿಂದ ಒಬ್ಬ ಸಾಫ್ಟ್ ವೇರ್ ಡೆವೆಲಪರ್ ಆಗಿದ್ದಾರೆ. ಆದರೆ ಒಬ್ಬ ಶಾಸ್ತ್ರೀಯ ಪಿಯಾನೋ ವಾದಕನಾಗಿ ಮತ್ತು ಹಾಡುಗಾರನಾಗಿ ಹಲವು ವರ್ಷಗಳಿಂದ ಸಂಗೀತದೊಂದಿಗೆ ಬೆಸೆದುಕೊಂಡು ಹಲವಾರು ಸಂಯೋಜನೆಗಳಿಂದ, ತಮ್ಮದೇ ಸ್ವತಂತ್ರ ಕೆಲಸಗಳಿಂದ ತಮಗಾಗಿ ಒಂದು ಅನನ್ಯವಾದ ಸ್ಥಾನವನ್ನು ರಚಿಸಿಕೊಂಡಿದ್ದಾರೆ. ಅವರ ಸಂಗೀತ ಸಂಯೋಜನೆಗಳು ಪಾಶ್ಚಾತ್ಯ ಪ್ರಭಾವಗಳೊಂದಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಂಪನ್ನು ಹದವಾಗಿ ಬೆರೆಸಿ ಅನನ್ಯವಾದ ಮಿಶ್ರಣವನ್ನು ಹೊರಹೊಮ್ಮಿಸುತ್ತವೆ. ತಮ್ಮ ವೃತ್ತಿಯೊಂದಿಗೆ ಸಂಗೀತದ ಸ್ವತಂತ್ರ ಯೋಜನೆಗಳನ್ನು ಕುಶಲತೆಯಿಂದ ನಿಭಾಯಿಸುತ್ತಲೇ ಲಂಡನ್ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಪಿಯಾನೋ ಗ್ರೇಡ್ಸ್ ಕಲಿಯುತ್ತಿದ್ದಾರೆ.
ಲೇಖಕ: ಬೋಳುವಾರು ಮಹಮ್ಮದ್ ಕುಂಇ
ಕನ್ನಡ ಕಥನ ಜಗತ್ತಿಗೆ ಮುಸ್ಲಿಂ ಲೋಕದ ತವಕ ತಲ್ಲಣಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟವರು ಬೊಳುವಾರು ಮಹಮದ್ ಕುಂಞ್ . ಹುಟ್ಟಿದ್ದು ಅಕ್ಟೋಬರ್ 22, 1951ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರು ಎಂಬಲ್ಲಿ. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಇವರು ಸಂಪಾದಿಸಿದ ತಟ್ಟು ಚಪ್ಪಾಳೆ ಪುಟ್ಟ ಮಗು- ಎಂಬ ಮಕ್ಕಳ ಪದ್ಯಗಳ ಸಂಕಲನದಿಂದಾಗಿ ಇವರು ಕನ್ನಡ ಮಕ್ಕಳ ಸಾಹಿತ್ಯದಲ್ಲೂ ಗಟ್ಟಿ ಜಾಗ ಪಡೆದಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಇವರ ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ ( ಇದು ಪ್ರಕಟವಾದ ಎರಡು ವರ್ಷಗಳಲ್ಲಿ ನಾಲ್ಕು ಮುದ್ರಣ ಕಂಡಿದೆ) ಕನ್ನಡದ ಮಕ್ಕಳಿಗೆ ಮಹಾತ್ಮ ಗಾಂಧಿಯವನ್ನು ಹೊಸದಾಗಿ ಪರಿಚಯಿಸಿದೆ. ಈ ಕೃತಿ 2010ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದೆ. ‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಭಾರತದ ಬಹುತೇಕ ಭಾಷೆಗಳಿಗೆ ಇವರ ಕತೆಗಳು ಅನುವಾದಗೊಂಡಿವೆ. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಅವರ ಕಥೆ ಗಾಂಧೀಜಿ ಮತ್ತು ಕಾಗೆಗಳು ಕೇಳಿ ಕಥೆ ಸಂಚಿಕೆಗೆ ಆರಿಸಿದ್ದೇವೆ
ಓದಿದವರು: : ಗಿರಿಜಾ ಲೋಕೇಶ್
ಗಿರಿಜಾ ಲೋಕೇಶ್ ತಮ್ಮನ್ನು ತಾವು ನಿರಂತರವಾಗಿ ಕನ್ನಡ ಚಲನಚಿತ್ರ, ಕಿರುತೆರೆ, ನಾಟಕಗಳು ಮುಂತಾದ ಕಲೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಕರ್ನಾಟಕದಲ್ಲೇ ಚಿರಪರಿಚಿತ ಹೆಸರು. ಲೆಕ್ಕವಿಲ್ಲದಷ್ಟು ಸಿನೆಮಾಗಳಲ್ಲಿ ಮತ್ತು ನಾಟಕಗಳಲ್ಲಿ ಕಳೆದ ನಲವತ್ತೈದು ವರ್ಷಗಳಿಂದ ಅಭಿನಯಿಸಿದ್ದಾರೆ. 2013 ರಲ್ಲಿ ಕರ್ನಾಟಕ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಈ ಸರಣಿಯಲ್ಲಿ ಇವರು ಎರಡೂ ಮಕ್ಕಳ ಕತೆಗಳನ್ನು ಓದಿದ್ದಾರೆ.
ಹಿನ್ನೆಲೆ ಸಂಗೀತ: ಎಮ್ ಡಿ ಪಲ್ಲವಿ
ಕನ್ನಡ ಸುಗಮ ಸಂಗೀತದ ಚಿರಪರಿಚಿತ ಹೆಸರು ಎಮ್ ಡಿ ಪಲ್ಲವಿ. ಸಾಕಷ್ಟು ಸಿನೆಮಾಗಳಲ್ಲೂ ಅಭಿನಯಿಸಿರುವ ಇವರು ಮಾಯಾಮೃಗದ ತಮ್ಮ ಪಾತ್ರದಿಂದ ರಾಜ್ಯಾದ್ಯಂತ ಜನಪ್ರಿಯರಾದವರು. ಗರ್ವ ಆಕೆಯ ಅಭಿನಯದ ಇನ್ನೊಂದು ಶ್ರೇಷ್ಠ ಧಾರಾವಾಹಿ. ದುನಿಯಾ ಚಿತ್ರದ ನೋಡಯ್ಯ ಕ್ವಾಟೆ ಲಿಂಗವೇ ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಂಗಭೂಮಿಯಲ್ಲೂ ಸಾಕಷ್ಟು ಕೆಲಸ ಮಾಡಿರುವ ಇವರು ಹ್ಯಾಮ್ಲೆಟ್, ಮಾನಿಷಾದ, ಅಗ್ನಿ ಮತ್ತು ಮಳೆಯಂತಹ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿಯವರ ಸ್ಟಂಬಲ್ ಚಿತ್ರದಲ್ಲಿ ಅಭಿನಯದ ಜೊತೆಗೆ ಚಿತ್ರಕತೆ ಮತ್ತು ನಿರ್ದೇಶನ ವಿಭಾಗದಲ್ಲೂ ದುಡಿದಿದ್ದಾರೆ. ಈ ಕಥಾ ಶ್ರಾವ್ಯ ಯೋಜನೆಯಲ್ಲಿ ನಾ ಡಿಸೋಜಾರ ಎರಡು ಮಕ್ಕಳ ಕತೆಗಳನ್ನ ನಮಗಾಗಿ ಓದಿದ್ದಾರೆ.
ಲೇಖಕ: ಕೆ ವಿ ತಿರುಮಲೇಶ್
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಕೆ.ವಿ. ತಿರುಮಲೇಶ್ ಕನ್ನಡದ ನವ್ಯಸಾಹಿತ್ಯದ ಸಂದರ್ಭದಲ್ಲಿ ಬರೆಯಲು ತೊಡಗಿದವರು. ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ‘ಮುಖವಾಡಗಳು’ ಹಾಗೂ ‘ವಠಾರ’ ಇವರ ಎರಡು ಜನಪ್ರಿಯ ಕೃತಿಗಳು. ಇವರ ೨೦ ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ತಿರುಮಲೇಶ್ ಅವರ 'ಅಕ್ಷಯ ಕಾವ್ಯ' ಕೃತಿಗೆ 2015ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.
ಓದಿದವರು: : ಗಿರಿಜಾ ಲೋಕೇಶ್
ಗಿರಿಜಾ ಲೋಕೇಶ್ ತಮ್ಮನ್ನು ತಾವು ನಿರಂತರವಾಗಿ ಕನ್ನಡ ಚಲನಚಿತ್ರ, ಕಿರುತೆರೆ, ನಾಟಕಗಳು ಮುಂತಾದ ಕಲೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಕರ್ನಾಟಕದಲ್ಲೇ ಚಿರಪರಿಚಿತ ಹೆಸರು. ಲೆಕ್ಕವಿಲ್ಲದಷ್ಟು ಸಿನೆಮಾಗಳಲ್ಲಿ ಮತ್ತು ನಾಟಕಗಳಲ್ಲಿ ಕಳೆದ ನಲವತ್ತೈದು ವರ್ಷಗಳಿಂದ ಅಭಿನಯಿಸಿದ್ದಾರೆ. 2013 ರಲ್ಲಿ ಕರ್ನಾಟಕ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಈ ಸರಣಿಯಲ್ಲಿ ಇವರು ಎರಡೂ ಮಕ್ಕಳ ಕತೆಗಳನ್ನು ಓದಿದ್ದಾರೆ.
ಸಂಗೀತ : ಸುಚೇತ್
ಬೆಂಗಳೂರಿನಲ್ಲಿ ನೆಲೆಸಿರುವ ಸುಚೇತ್ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ರಾಕ್ ಸಂಗೀತ ಎರಡರಿಂದಲೂ ಪ್ರಭಾವಿತರಾದವರು. ಗಿಟಾರಿಸ್ಟ್ ಆಗಿರುವ ಸುಚೇತ್ ಹೈಕು -ಲೈಕೆನ್ ಇಮ್ಯಾಜಿನೇಶನ್ ಎನ್ನುವ ಆಲ್ಬಮ್ ಗಾಗಿ ಸಂಗೀತ ನುಡಿಸುತ್ತಾರೆ. ಇವರ ಸಂಗೀತವನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಕೇಳಬಹುದು. ಸಂಗೀತದ ಜೊತೆಗೆ ಸುಚೇತ್ ಸದ್ಯಕ್ಕೆ ಸಿ.ಎ ಕೂಡ ಮಾಡುತ್ತಿದ್ದಾರೆ.
Keli Katheya is a Kannada audio book that has been conceived to bring the world of Kannada short stories . These Kannada stories are chosen from different Kannada story books authored by famous Kannada authors.